"ಕೂಡುವುದು ಸಹಜ
ಅಗಲಿಕೆ ಅನಿವಾರ್ಯ"ದಿ.೩೧/೦೭/೨೦೧೭ ರಂದು ಕ್ಷೇತ್ರ ಸಂಪನ್ಮೂಲ ಕೇಂದ್ರ ಜೇವರ್ಗಿಯಲ್ಲಿ ನಮ್ಮ ನೆಚ್ಚಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಆರ್.ಜಿ.ಮಜ್ಹರ್ ಹುಸೇನ್ ಅವರ ಬಿಳ್ಕೊಡುವ ಸಮಾರಂಭ ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿಗಳಾದ ಡಾ. ನಿಂಗರಾಜ ಮೂಲಿಮನಿ,ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು,ಸಮೂಹ ಸಂಪನ್ಮೂಲ ವ್ಯಕ್ತಿಗಳು ಹಾಗೂ ವಿವಿಧ ಸಂಘಗಳ ಪದಾಧಿಕಾರಿಗಳು ಹಾಜರಿದ್ದರು. ಆಲೂರು ಸಿ.ಆರ್.ಪಿ ಯಾದ ಶ್ರೀ ದಾವಲ್ ಸಾಬ ನಿರೂಪಿಸಿದರು. ಸಿ.ಆರ್.ಪಿ ಗಳಾದ ಶ್ರೀ ಮಲ್ಲನಗೌಡ, ಶ್ರೀ ಪ್ರಮೋದ್, ಶ್ರೀ ಸಚಿನ್ ಕುಮಾರ,ಶ್ರೀ ಓಬಳೇಶ್ ಹಾಗೂ ಬಿ.ಆರ್.ಪಿ ಯಾದ ಶ್ರೀ ಮನೋಹರ ಅನಿಸಿಕೆ ವ್ಯಕ್ತಪಡಿಸಿದರು. ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಶರಣಪ್ಪ ಹೊಸಮನಿ, ಐಇಆರ್ಟಿ ಶ್ರೀ ಗುರುಶಾಂತಪ್ಪ ಚಿಂಚೋಳಿ ಹಾಗೂ ಪ್ರೌಢ ಶಾಲಾ ಮುಖ್ಯಗುರುಗಳಾದ ಹಣಮಂತ ಕುಳಗೇರಿ ಅವರೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಬಗ್ಗೆ ಅವರ ಕಾರ್ಯ ವೈಖರಿಯ ಬಗ್ಗೆ ಮೆಚ್ಚಿನ ಮ ಅದರ ಮಾತುಗಳನ್ನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಅಪೇಕ್ಷೆಯ ಮೇರೆಗೆ ನರಿಬೋಳ ತಾಂಡಾ ಮುಖ್ಯ ಗುರು ಗಳಾದ ಶ್ರೀ ಗುರು ಲಿಂಗಪ್ಪ ಬುಕ್ಕಾ ಅವರು ವಚನ ಸುಧೆ ಹಾಡಿ ರಂಜಿಸಿದರು.ಬಳಿಕ ಬಿ ಆರ್ ಸಿ ಕಾರ್ಯಾಲಯದ ವತಿಯಿಂದ,ಕ.ರಾ.ಸ.ನೌ.ಸಂಘ ,ಕ.ರಾ.ಪ್ರಾ.ಶಾ.ಶಿ.ಸಂಘ ಹಾಗೂ ಕ.ರಾ.ಪ್ರೌ.ಶಾ.ಶಿ ಸಂಘದ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಸನ್ಮಾನಿಸಲಾಯಿತು.ತರುವಾಯ ತಮ್ಮ ಸೇವೆಯ ಬಗ್ಗೆ ಹಾಗೂ ಶಿಕ್ಷಕರೊಂದಿಗಿನ ಒಡನಾಟದ ಬಗ್ಗೆ ಕ್ಷೇತ್ರ ಶಿಕ್ಷಣಾದಿಕಾರಿಗಳು ಅಭಿಪ್ರಾಯ ಹಂಚಿಕೊಂಡರು. ವೃತ್ತಿಪರತೆಯನ್ನು ಮೆಚ್ಚಿ ಸ್ವಾಭಿಮಾನದಿಂದ ಸೇವೆ ಸಲ್ಲಿಸಲು ಸೂಚಿಸಿದರು. ಅವರ ಮಾತುಗಳಿಂದ ಅಲ್ಲಿ ನೆರೆದವರೆಲ್ಲ ಭಾವುಕರಾದರು.ಒಂದು ವಿಷಣ್ಣ ಮನಸ್ಥಿತಿಯಿಂದ ಮೆಚ್ಚಿನ ಅಧಿಕಾರಿಯನ್ನು ಬಿಳ್ಕೊಡಲಾಯಿತು.
- ಮುಖಪುಟ
- ಸಾರ್ವಜನಿಕ ಶಿಕ್ಷಣ ಇಲಾಖೆ
- ನಂಮ ಶಾಲೆ ಬ್ಲಾಗ್
- ಶಿಕ್ಷಕ ಕಲ್ಯಾಣ ನಿಧಿ ವಿವರ
- ಶಿಕ್ಷಣವಾರ್ತೆ
- ಇಲಾಖೆಯಲ್ಲಿನ ವಿವಿಧ ಅಧಿಕಾರಿಗಳ ಸಂಪರ್ಕ ಸಂಖ್ಯೆಗಳು
- ಶಿಕ್ಷಣ ಕಿರಣ(SATS)
- ಇಜೇರಿ OOSC ಮಾಹಿತಿ 2017-18
- ಶಿಕ್ಷಕರ ಸೇವಾ ವಿವರ
- ಸಂಪರ್ಕ ಮಾಹಿತಿ
- ಇಜೇರಿ ವಲಯದ ಶಾಲೆಗಳ ವಿವರ
- ಸುತ್ತೋಲೆಗಳು & ಹೊಸ ಮಾಹಿತಿಗಳು
- ಹಣಕಾಸು ವಿವರ
- ಶಾಲೆಗಳು & ಮುಖ್ಯೋಪಾಧ್ಯಾಯರುಗಳು
- ವಿಶೇಷ ಅಗತ್ಯತೆಯುಳ್ಳ ಮಕ್ಕಳ ಮಾಹಿತಿ
- ಸಭಾ ನಡೆವಳಿಗಳು
- ಫೋಟೊ ಗ್ಯಾಲರಿ
- ಬ್ಲಾಗ್ ರಚನೆ : ಸಚಿನ್ಕುಮಾರ ಹಿರೇಮಠ
- ಇದುವರೆಗಿನ ಸಿ.ಆರ್.ಪಿಗಳ ವಿವರ
ಪ್ರಮುಖ ಸಂದೇಶ
Tuesday, 1 August 2017
ಕ್ಷೇತ್ರ ಶಿಕ್ಷಣಾಧಿಕಾರಿಗಳ ಭಾವನಾತ್ಮಕ ಬಿಳ್ಕೊಡುಗೆ
Subscribe to:
Post Comments (Atom)
No comments:
Post a Comment